ಕಲಬುರಗಿ: ಭದ್ರತೆಗೆ ಸೈನಿಕರ ಸಂಖ್ಯೆ ಕಡಿಮೆ ಮಾಡಿರುವುದೇ ಉಗ್ರರು ನುಸುಳಲು ಹಾಗೂ ಕಾಶ್ಮೀರದಲ್ಲಿ ದಾಳಿಗೆ ಕಾರಣವಾಗಿರಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷದಿಂದ ಸೇನಾ ನೇಮಕಾತಿ ಮಾಡಿಲ್ಲ. ಮೇಲಾಗಿ 1.09 ಲಕ್ಷ ಸೇನಾ ನೇಮಕಾತಿ ಕಡಿಮೆ ಮಾಡಲಾಗಿದೆ. ಜನಸಂಖ್ಯೆ ಹೆಚ್ಚಳವಾಗಿದೆ. ಅದರ ತಕ್ಕಂತೆ ಸೇನಾ ಬಲವೂ ಹೆಚ್ಚಳವಾಗಬೇಕು. ಒಟ್ಟಾರೆ ಉಗ್ರರ ದಾಳಿಯ ಘಟನೆಯ ಸಂಪೂರ್ಣ ಹೊಣೆ ಕೇಂದ್ರ ಸರ್ಕಾರದ್ದು. ಪ್ರಮುಖವಾಗಿ ಅಗ್ನಿವೀರ ಕೇವಲ ಮೂರು ವರ್ಷ ಸೇವೆ ಎಂಬುದಾಗಿ ಮಾತ್ರ ಮಾಡಲಾಗಿದೆ. ಅಗ್ನಿವೀರ ನೇಮಕಾತಿ ಖಾಯಂ ಆಗಬೇಕು. ಒಟ್ಟಾರೆ ಇಂತಹ ದಾಳಿ ಪುನರಾವರ್ತನೆಯಾಗದಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥಸಿಂಗ್ ಮುಂದಾಗಬೇಕು ಎಂದರು. ಇನ್ನು ಇಲ್ಲಿಯವರೇ ಇರಲಿ ಅಥವಾ ಹೊರಗಿನವರೇ ಇರಲಿ. ಆದರೆ ಮಟ್ಟ ಹಾಕುವ ಕೆಲಸ ತುರ್ತಾಗಿ ಆಗಬೇಕು. ಈ ಹಿಂದೆ ಇಂದಿರಾಗಾಂಧಿ ಏನು ಮಾಡಿದ್ದರು ಎಂಬುದನ್ನು ಅರಿತು ದೃಢ ಹೆಜ್ಜೆ ಇಡಬೇಕು. ಇದರಲ್ಲಿ ಇಲ್ಲದ್ದನ್ನು ಹುಡುಕಾಡಬಾರದು ಎಂದರು.
ಉಗ್ರರ ದಾಳಿಯ ಸಂಪೂರ್ಣ ಹೊಣೆ ಕೇಂದ್ರದ್ದು- ರಾಮಲಿಂಗಾರೆಡ್ಡಿ
2025-04-23 15:33:37- 6