News / Blog Details

  • Home
  • >
  • News / Blog Details

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂತೆ- ಯತ್ನಾಳ್‌

  • 64
img ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂತೆ- ಯತ್ನಾಳ್‌
Font size:
Print

ಹುಬ್ಬಳ್ಳಿ: ಕಾಂಗ್ರೆಸ್ ಹಿಂದೂಗಳ ಪಕ್ಷವೇ ಅಲ್ಲ. ಅದು ಹುಟ್ಟಿದ್ದು ಮುಸ್ಲಿಮರಿಗಾಗಿ. ಎಲ್ಲಿಯವರಗೆ ದೇಶದಲ್ಲಿ ಮುಸ್ಲಿಮರು ಇರುತ್ತಾರೋ ಅಲ್ಲಿವರೆಗೆ ಅವರು ಕಲ್ಲು ಹೊಡೆಯುವವರು. ಸಿಎಂ ಸಿದ್ದರಾಮಯ್ಯ ಪಾಕಿಸ್ತಾನ ಏಜೆಂಟ್ ಇದ್ದಂತೆ. ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ ಪ್ರಧಾನಿಯಾಗಲಿ. ಯಾರು ಬೇಡ ಅಂತಾರೇ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ ಲಾಡ್ ಮೋದಿ ಮುಂದೆ ಬಚ್ಚಾ. ಅವರ ಬಗ್ಗೆ ಹೀಯಾಳಿಸಿ ಮಾತನಾಡಿದರೆ ಸೋನಿಯಾ, ರಾಹುಲ್ ಗಾಂಧಿ ಖುಷಿಯಾಗುತ್ತಾರೆ. ತನ್ನ ಮಂತ್ರಿ ಸ್ಥಾನ ಉಳಿಯುತ್ತದೆ ಎಂದು ಆ ರೀತಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ ಎಂದು ಕುಟುಕಿದರು. ಅಂಬೇಡ್ಕ‌ರ್ ಹೇಳಿದ್ದು ನೋಡಿದರೆ ಒಬ್ಬ ದಲಿತ ಕೂಡ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದರು.
ರೈಲ್ವೇ ಪರೀಕ್ಷೆಯಲ್ಲಿ ಮಂಗಳಸೂತ್ರ, ಕುಂಕುಮ, ಜನಿವಾರ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾರೇ ಈ ರೀತಿ ಮಾಡಿದರು ಕೂಡ ಅದು ತಪ್ಪೆ. ಮಂಗಳಸೂತ್ರ, ಕುಂಕುಮಕ್ಕೆ ಕೈ ಹಾಕಿದವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಶಾಸಕರ ವಜಾ ರದ್ದುಗೊಳಿಸಲು ಬಿಜೆಪಿ ರಾಜ್ಯಪಾಲರಿಗೆ ಮನವಿ ವಿಚಾರವಾಗಿ, ಶಾಸಕರು ಸಭಾಧ್ಯಕ್ಷರ ಅಂಕಣಕ್ಕೆ ಹೋಗಿ ದಾಂಧಲೇ ಮಾಡು ಅಂತ ಹೇಳಿದವರೇ ವಿಜಯೇಂದ್ರ. ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಈ ರೀತಿ ಸೂಚನೆ ನೀಡಿದ್ದೇ ಆತ. ಅಪ್ರಭುದ್ದ ವ್ಯಕ್ತಿಯನ್ನು ಅಧ್ಯಕ್ಷ ಮಾಡಿದ್ದು ತಪ್ಪು. ವಿಧಾನಸಭೆ ಅಧ್ಯಕ್ಷರ ಕುರ್ಚಿ ಬಳಿ ಹೋಗಿ ಯಾರು ಹೋರಾಟ ಮಾಡಿದರು ತಪ್ಪೇ, ಸದನದ ಬಾವಿಯಲ್ಲಿ ಮಾತ್ರ ಶಾಸಕರು ಹೋರಾಟ ನಡೆಸಬೇಕು ಎಂದು ಸಭಾಧ್ಯಕ್ಷರ ಕ್ರಮ ಸಮರ್ಥಿಸಿಕೊಂಡರು. ಇನ್ನು ಪಾಕಿಸ್ತಾನವು ಅಣುಬಾಂಬ್ ದಾಳಿ ಮಾಡುವುದಾಗಿ ಹೇಳಿಕೆ ಕುರಿತು, ನಮ್ಮಲ್ಲಿರುವ ಅಣು ಬಾಂಬ್‌ಗಳು ಪಟಾಕಿ ಹಚ್ಚಲು ಅಲ್ಲ. ಪಾಕಿಸ್ತಾನ ಮೇಲೆ ನಮ್ಮಲ್ಲಿರುವ ನಾಲ್ಕು ಒಗೆದರೆ ಸಾಕು ಅವರು ಸರ್ವನಾಶ ಆಗುತ್ತಾರೆ. ಭಾರತದ ಶಕ್ತಿಯನ್ನು ಯಾರು ಹಗುರವಾಗಿ ಪರಿಗಣಿಸಬಾರದು. ನೆಹರು ಇದ್ದ ಕಾಲದ ಭಾರತ ಈಗಿಲ್ಲ. ವಿಶ್ವದಲ್ಲೇ ಬಲಿಷ್ಠವಾಗಿದೆ ಎಂದರು. ಈ ಬಾರಿ ಪಾಕಿಸ್ತಾನ ಅಂತ್ಯವಾಗಬೇಕು. ಭಾರತದಲ್ಲಿ ಬೆನ್ನಿಗೆ ಚೂರಿ ಹಾಕುವವರು ಹೆಚ್ಚಾಗಿದ್ದಾರೆ. ಹೀಗಾಗಿ ದೇಶವು ಒಳಗಿನಿಂದ ಮತ್ತು ಹೊರಗಿನಿಂದ ವೈರಿಗಳನ್ನು ಎದುರಿಸಬೇಕಿದೆ. ಯುದ್ಧವಾದರೆ ಅವರ ಅಸಲಿತನ ಹೊರಗೆ ಬರುತ್ತದೆ. ಪಾಕಿಸ್ತಾನ ಜೊತೆ ಬಾಂಗ್ಲಾದೇಶ ಸಹ ನಾಶವಾಗಬೇಕು. ಅವೆರಡು ಭಾರತದೊಳಗೆ ಸೇರಬೇಕು ಎಂದರು. 
 

No Reviews