News / Blog Details

  • Home
  • >
  • News / Blog Details

ತಿರುಪತಿಗೆ ತೆರಳುವ ಬೆಳ್ಳಿ ದೀಪಗಳಿಗೆ ದೇವೇಗೌಡರಿಂದ ಪೂಜೆ

  • 6
img ತಿರುಪತಿಗೆ ತೆರಳುವ ಬೆಳ್ಳಿ ದೀಪಗಳಿಗೆ ದೇವೇಗೌಡರಿಂದ ಪೂಜೆ
Font size:
Print

ತಿರುಪತಿ ತಿಮ್ಮಪ್ಪನಿಗೆ ಕೋಟ್ಯಾನು ಕೋಟಿ ಭಕ್ತರಿದ್ದಾರೆ. ಜಗತ್ತಿನ ಮೂಲೆ, ಮೂಲೆಯಿಂದಲೂ ಗೋವಿಂದನ ನಾಮ ಸ್ಮರಣೆ ಮಾಡುವ ಭಕ್ತರು ತಿರುಮಲದಲ್ಲಿ ಶ್ರೀನಿವಾಸನ ದರ್ಶನ ಮಾಡುತ್ತಾರೆ. ತಿಮ್ಮಪ್ಪನ ಈ ಶ್ರೀಕ್ಷೇತ್ರವನ್ನ ಭೂಲೋಕದ ವೈಕುಂಠ ಎಂದೇ ಕರೆಯಲಾಗುತ್ತದೆ. ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಬಾಲಾಜಿಯ ಪರಮ ಭಕ್ತರು ಹೌದು. ತಿಮ್ಮಪ್ಪನ ಆರಾಧನೆ ಮಾಡುವ ದೇವೇಗೌಡರು, ತಿರುಪತಿಗೆ ತೆರಳುವ 250 ಕೆ.ಜಿ ತೂಕದ 4 ಬೆಳ್ಳಿ ದೀಪಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹೆಸರು ಹೇಳಲು ಇಚ್ಚಿಸದ ಭಕ್ತರೊಬ್ಬರು 250 ಕೆಜಿ ಬೆಳ್ಳಿಯ 4 ದೀಪಗಳನ್ನು ತಿರುಪತಿಗೆ ನೀಡಲು ಮುಂದಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈ ಬೃಹತ್ ಬೆಳ್ಳಿಯ ದೀಪಗಳು ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಬೆಳಗುತ್ತಿವೆ.
4 ಬೃಹತ್ ಬೆಳ್ಳಿ ದೀಪಗಳನ್ನು ತಿರುಮಲಕ್ಕೆ ಕಳುಹಿಸೋ ಮುನ್ನ ತಿಮ್ಮಪ್ಪನ ಭಕ್ತರು ದೇವೇಗೌಡರಿಂದ ಪೂಜೆ ಮಾಡಿಸಿದ್ದಾರೆ. 250 ಕೆಜಿ ತೂಕದ ಈ ಬೆಳ್ಳಿಯ ದೀಪಗಳಲ್ಲಿ ಸುಮಾರು 30 ಲೀಟರ್‌ ಎಣ್ಣೆ ಹಾಕಬಹುದು. ಅಂದ್ರೆ ಈ ಬೆಳ್ಳಿಯ ದೀಪಗಳು ಗಂಟೆಗಳಲ್ಲ ಕೆಲ ದಿನದವರೆಗೂ ಪ್ರಜ್ವಲಿಸುತ್ತೆ ಎನ್ನಲಾಗಿದೆ.
 

No Reviews