ನವದೆಹಲಿ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಲೋತ್ರಾಗೆ ಉಗ್ರ ಚಟುವಟಿಕೆಗಳಿಗೆ ಕುಖ್ಯಾತವಾಗಿರುವ ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯ ಉಗ್ರರ ಕೇಂದ್ರಗಳವರೆಗೆ ಸಂಪರ್ಕ ಇತ್ತು ಎಂದು ತನಿಖೆಗಳು ಬಹಿರಂಗಪಡಿಸಿವೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐನ ಪ್ರಮುಖ ಮಾಡ್ಯೂಲ್ಗೆ ಸಂಬಂಧಿಸಿದ ಪಿತೂರಿಯನ್ನು ಬಹಿರಂಗವಾಗಿದ್ದು, ಭಾರತದಲ್ಲಿ ಬೇಹುಗಾರಿಕೆ ಜಾಲವನ್ನು ನಿರ್ವಹಿಸಲು ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂಬುದು ಬಯಲಾಗಿದೆ. ತನಿಖೆಗಳ ಪ್ರಕಾರ ಐಎಸ್ಐ ಮಾಡ್ಯೂಲ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಭಾವ ಹೊಂದಿರುವ ವ್ಯಕ್ತಿಗಳನ್ನು ಕಾರ್ಯತಂತ್ರದ ಭಾಗವಾಗಿ ನೇಮಕ ಮಾಡಿಕೊಂಡಿದೆ ಎಂದು ಕಂಡುಬಂದಿದೆ. ಗುಪ್ತಚರ ಮಾಹಿತಿ ಸಂಗ್ರಹಿಸುವುದರ ಜತೆಗೆ, ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ಪ್ರಚಾರ ಮಾಡುವ ಕಾರ್ಯವನ್ನು ಸಹ ವಹಿಸಲಾಗಿತ್ತು ಎಂದು ಹೇಳಲಾಗಿದೆ.
ಇನ್ನು ಬೇಹುಗಾರಿಕೆ ಎಂದರೆ ವ್ಯಕ್ತಿಯೊಬ್ಬ ಅಥವಾ ಸಂಸ್ಥೆಯು ರಹಸ್ಯವಾಗಿ ಇನ್ನೊಬ್ಬರ ಮಾಹಿತಿ ಅಥವಾ ಚಟುವಟಿಕೆಗಳನ್ನು ಅಕ್ರಮವಾಗಿ ಅಥವಾ ಗುಪ್ತವಾಗಿ ಸಂಗ್ರಹಿಸುವ ಕ್ರಿಯೆ. ಇದನ್ನು ಸಾಮಾನ್ಯವಾಗಿ ವೈಯಕ್ತಿಕ, ರಾಜಕೀಯ, ಸೇನೆಯ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಮಾಡಲಾಗುತ್ತದೆ. ಪ್ರಪಂಚದಾದ್ಯಂತದ ದೇಶಗಳು ಪರಸ್ಪರ ಕಣ್ಣಿಡುತ್ತವೆ. ಇದಕ್ಕಾಗಿ ಅವರ ಏಜೆನ್ಸಿಗಳು ವಿಭಿನ್ನ ತಂತ್ರಗಳನ್ನು ಪ್ರಯತ್ನಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ‘ಗೂಢಚರ್ಯೆ’ ಎಂಬ ಪದ ಬಹುತೇಕ ಎಲ್ಲರ ಬಾಯಲ್ಲೂ ಕೇಳಿಬರುತ್ತದೆ.
ಮಲ್ಲೋತ್ರಾ ಯೂಟ್ಯೂಬ್ನಲ್ಲಿ ಸುಮಾರು 4 ಲಕ್ಷ ಚಂದಾದಾರರನ್ನು ಮತ್ತು ಇನ್ಸ್ಟಾಗ್ರಾಮ್ ನಲ್ಲಿ 1,32,000 ಅನುಯಾಯಿಗಳನ್ನು ಹೊಂದಿದ್ದಳು. ಈಗಾಗಲೇ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ 11 ಜನರಲ್ಲಿ ಒಬ್ಬಳಾಗಿದ್ದಾಳೆ.
ಜ್ಯೋತಿ ಮಲ್ಲೋತ್ರಾಗೆ ಉಗ್ರರ ಸಂಪರ್ಕ- ತನಿಖೆಯಲ್ಲಿ ಬಹಿರಂಗ.?
2025-05-20 13:18:27- 68