News / Blog Details

  • Home
  • >
  • News / Blog Details

ಕುಂಭಮೇಳಕ್ಕೆ ಹೋಗಿದ್ದ ಬೀದರ್‌ ಮೂಲದ 6 ಮಂದಿ ಸಾವು

  • 39
img ಕುಂಭಮೇಳಕ್ಕೆ ಹೋಗಿದ್ದ ಬೀದರ್‌ ಮೂಲದ 6 ಮಂದಿ ಸಾವು
Font size:
Print

ಲಕ್ಕೋ : ಪ್ರಯೋಗ್‌ ರಾಜ್‌ ಕುಂಬಮೇಳಕ್ಕೆ  ಹೋಗಿದ್ದ ಬೀದರ್‌ ಮೂಲದ  ಒಂದೇ ಕುಟುಂಬದ 6 ಜನ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ  ಉತ್ತರ ಪ್ರದೇಶದ  ಕಾಶಿ ಬಳಿ ನಡೆದಿದೆ.

ಲಾರಿ ಮತ್ತು ಕ್ರೊಸರ್‌ ನಡುವೆ ಇಂದು ಬೆಳಿಗ್ಗೆ  ಮೀರಾಜಾಪುರ  ಜಿಲ್ಲೆಯ ರೂಪಾಪೂರ ಬಳಿ ಈ ಘಟನೆ ನಡೆದಿದ್ದು,6 ಮಂದಿ ಸಾವನ್ನಪ್ಪಿದ್ದು ಉಳಿದವರ ಸ್ಥಿತಿ ಚಿಂತಾಜನಕವಾಗಿದೆ.ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಬೀದರ್‌ ನಗರದ ಲಾಡಗೇರಿ ಬಡಾವಣೆಯ  ನಿವಸಿಗಳಾದ ಸುನೀತ (35), ಸಂತೋಷ್‌ (43), ನೀಲಮ್ಮ  (60) ಸೇರಿ 6 ಜನರು ಸಾವನ್ನಪಿದ್ದಾರೆ.

ಒಂದೇ ಗಾಡಿಯಲ್ಲಿ ಒಟ್ಟು 12 ಜನ ಕುಂಭಮೇಲಕ್ಕೆ ತೆರಳುತ್ತಿದ್ದರು.ಪುನ್ನ ಸ್ನಾನ ಮಾಡಿದ ಬಳಿಕ ಪ್ರಯಾಗ್‌ ರಾಜ್‌ನಲ್ಲಿ ಬಳಿಕ,ಪ್ರಯಾಗ್‌ರಾಜ್‌ನಿಂದ ಕಾಶಿ ಕಡೆಗೆ ಕ್ರೂಸರ್‌ನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗೆ ಕಾಶಿಯಿಂದ 20 ಕಿಲೋ‌ ಮೀಟರ್‌ ದೂರದಲ್ಲಿ ಲಾರಿಗೆ ಹಿಂದಿನಿಂದ ಕ್ರೂಸರ್‌  ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಉಳಿದವರ ಸ್ಥಿತಿ ಗಂಭೀರವಾಗಿದೆ.

ಗಾಯಗೊಂಡವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

 

No Reviews