ನವದೆಹಲಿ: ಆಪರೇಷನ್ ಸಿಂಧೂರ್ ಕೇವಲ 25 ನಿಮಿಷಗಳ ಕಾಲ ನಡೆದ ಕ್ಷಿಪ್ರ ಮತ್ತು ಸಂಘಟಿತ ದಾಳಿಯಾಗಿದ್ದು ಬುಧವಾರ ನಸುಕಿನ ವೇಳೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಉನ್ನತ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.ಬಾಲಕೋಟ್ ನಂತರ ಅತ್ಯಂತ ದೊಡ್ಡ ಮಟ್ಟದ ಗಡಿಯಾಚೆಗಿನ ದಾಳಿ ಇದಾಗಿದೆ. ಆಪರೇಷನ್ ಸಿಂಧೂರ್ ದಾಳಿಗಳು ವಾಯು, ನೌಕಾ ಮತ್ತು ಭೂ-ಆಧಾರಿತ ನೆಲೆಗಳನ್ನು ಒಳಗೊಂಡಿದ್ದು, ಪಹಲ್ಲಾಮ್ ನಲ್ಲಿ ನಡೆದ 26 ನಾಗರಿಕರ ಹ*ತ್ಯೆಗೆ ಪ್ರತಿಕ್ರಿಯೆಯಾಗಿ ನಡು ರಾತ್ರಿಯಲ್ಲೇ ಪ್ರಾರಂಭಿಸಲಾಗಿದೆ. ಪಾಕಿಸ್ತಾನವು ಉದ್ದೇಶಪೂರ್ವಕವಾಗಿ ಜಗತ್ತನ್ನು ಮತ್ತು ಹಣಕಾಸು ಕಾರ್ಯಪಡೆಯಂತಹ ಅಂತಾರಾಷ್ಟ್ರೀಯ ವೇದಿಕೆಗಳನ್ನು ದಾರಿತಪ್ಪಿಸುವಲ್ಲಿ ಹೆಸರುವಾಸಿಯಾಗಿದೆ. ಸಾಜಿದ್ ಮಿರ್ ಪ್ರಕರಣದಲ್ಲಿ ಈ ಭಯೋತ್ಪಾದಕನನ್ನು ಸತ್ತನೆಂದು ಘೋಷಿಸಲಾಯಿತು ಮತ್ತು ನಂತರ, ಅಂತಾರಾಷ್ಟ್ರೀಯ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ, ಅವನನ್ನು ಮತ್ತೆ ಜೀವಂತಗೊಳಿಸಿ, ಜೀವಂತವಾಗಿ ಪತ್ತೆ ಮಾಡಿ ಬಂಧಿಸಲಾಗಿತ್ತು, ಇದು ಅತ್ಯಂತ ಎದ್ದುಕಾಣುವ ಉದಾಹರಣೆಯಾಗಿದೆ. ಪಹಲ್ಲಾಮ್ ನಲ್ಲಿ ನಡೆದ ಇತ್ತೀಚಿನ ದಾಳಿಯು ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ಆಳವಾದ ಆಕ್ರೋಶವನ್ನು ಹುಟ್ಟುಹಾಕಿದೆ. ದಾಳಿಗಳ ನಂತರ, ಭಾರತ ಸರಕಾರವು ಸ್ವಾಭಾವಿಕವಾಗಿ ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಕ್ಕೆ ಸಂಬಂಧಿಸಿದಂತೆ ಆರಂಭಿಕ ಕ್ರಮಗಳೊಂದಿಗೆ ಪ್ರತಿಕ್ರಿಯಿಸಿದೆ ಎಂದು ಮಿಸ್ತ್ರಿ ಹೇಳಿದ್ದಾರೆ. ಪಹಲ್ಲಾಮ್ ದಾಳಿಯಲ್ಲಿ ಮೃ*ತ ಪಟ್ಟವರಿಗೆ ನ್ಯಾಯ ಒದಗಿಸಲು ಆಪರೇಷನ್ ಸಿಂಧೂರ್ ಪ್ರಾರಂಭಿಸಲಾಗಿದ್ದು, ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಲಾಗಿದೆ. ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ, ಮತ್ತು ಇಲ್ಲಿಯವರೆಗೆ ಪಾಕಿಸ್ತಾನದಲ್ಲಿ ನಾಗರಿಕರ ಸಾ*ವುನೋವುಗಳ ಬಗ್ಗೆ ಯಾವುದೇ ವರದಿಗಳಿಲ್ಲ. ಎಂದು ಕರ್ನಲ್ ಸೋಫಿಯಾ ಖುರೇಷಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ್ ಕೇವಲ 25 ನಿಮಿಷಗಳ ಕಾಲ ನಡೆದಿದೆ; ಮಿಲಿಟರಿ ಅಧಿಕಾರಿಗಳಿಂದ ಮಾಹಿತಿ
2025-05-07 13:04:47- 74