News / Blog Details

  • Home
  • >
  • News / Blog Details

ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದಾರೆ- ಪರಮೇಶ್ವರ್‌

  • 6
img ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದಾರೆ- ಪರಮೇಶ್ವರ್‌
Font size:
Print

ಬೆಂಗಳೂರು: ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರ ಭೀಕರ ದಾಲಿ ಮಾಡಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಹಿಂದೂ ಗಳನ್ನೇ ಹುಡುಕಿ ದಾಳಿ ಮಾಡಿರುವುದು ಆಘಾತಕಾರಿ. ಈ ದಾಳಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರವಾದದ್ದು, ನೀವು ಹಿಂದೂಗಳಾ ಎಂದು ಪ್ರಶ್ನಿಸಿ ದಾಳಿ ಮಾಡಿದ್ದಾರೆ. ಅಂಥವರ ವಿರುದ್ಧ ಕೇಂದ್ರ ಸರಕಾರ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನು ಉಗ್ರರು ಮಂಗಳವಾರ ನಡೆಸಿದ ನಡೆದ ಪೈಶಾಚಿಕ ದಾಳಿಯಲ್ಲಿ ರಾಜ್ಯದ ಮೂವರು ಬಲಿಯಾಗಿದ್ದಾರೆ. ಮೂಲತಃ ಆಂಧ್ರದ ನೆಲ್ಲೂರಿನ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನೆಲೆಸಿರುವ ಐಟಿ ಉದ್ಯೋಗಿ ಮಧುಸೂದನ್ ದಾಳಿಗೆ ಬಲಿಯಾಗಿದ್ದಾರೆ. ಎರಡು ದಿನದ ಹಿಂದೆ ಕುಟುಂಬದೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು. ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನಲ್ಲಿ ನೆಲೆಸಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಭರತ್ ಭೂಷಣ್ (41) ಮೃ*ತರಾಗಿದ್ದಾರೆ.
 

No Reviews