News / Blog Details

  • Home
  • >
  • News / Blog Details

ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಮೇಘನಾ ರಾಜ್ ..,;ಚಿರು ಸರಿಯಾದ ವ್ಯಕ್ತಿ ಕಳುಹಿಸಿದರೆ

  • 12
img ಎರಡನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಮೇಘನಾ ರಾಜ್ ..,;ಚಿರು ಸರಿಯಾದ ವ್ಯಕ್ತಿ ಕಳುಹಿಸಿದರೆ
Font size:
Print

ಮೇಘನಾ ರಾಜ್ ಅವರು ತಮ್ಮ ಪತಿ ಚಿರಂಜೀವಿ ಅವರ ನಿಧನದ ನಂತರದ ಜೀವನ ಮತ್ತು ಎರಡನೇ ಮದುವೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ರಾಯನ್‌ನ ಬೆಳವಣಿಗೆಯ ಬಗ್ಗೆ ಹಾಗೂ ಅವರ ಜೀವನದಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ.
 ಅವರು ಎರಡನೇ ಮದುವೆಯ ಬಗ್ಗೆ ಇರುವ ವದಂತಿಗಳನ್ನು ಒಪ್ಪಿಕೊಂಡಿದ್ದಾರೆ.ಚಿರಂಜೀವಿ  ಹಾಗೂ ಮೇಘನಾ ರಾಜ್ ಪ್ರೀತಿಸಿ ಮದುವೆ ಆದವರು. ವಿವಾಹ ಆದ ಕೆಲವೇ ವರ್ಷಗಳಲ್ಲಿ ಚಿರು ಅವರು ಹೃದಯಾಘಾತದಿಂದ ನಿಧನ ಹೊಂದಿದರು. 
ಚಿರು ಸಾಯುವಾಗ ಮೇಘನಾ ಪ್ರೇಗ್ನೆಂಟ್ ಆಗಿದ್ದರು. ಆ ಬಳಿಕ ಮೇಘನಾ ರಾಜ್​ಗೆ ಗಂಡು ಮಗು ಜನಿಸಿತು. 
ಈತನಿಗೆ ರಾಯನ್ ಎಂದು ನಾಮಕರಣ ಮಾಡಲಾಗಿದೆ. ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಆಗಾಗ ವದಂತಿಗಳು ಹುಟ್ಟಿಕೊಳ್ಳುತ್ತವೆ.
 ಈ ಬಗ್ಗೆ ‘ಗೋಲ್ಡ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.‘ರಾಯನ್ ಬಂದಮೇಲೆ ಸಾಕಷ್ಟು ಬದಲಾವಣೆ ಆಯ್ತು.
 ನಮ್ಮ ಕುಟುಂಬದವರು ಮತ್ತಷ್ಟು ಆಪ್ತರಾದೆವು. ಕೆಲವು ಗೊಂದಲ ಇತ್ತು. ಅದೆಲ್ಲವೂ ಬಗೆಹರಿಯಿತು. 
ರಾಯನ್ ಹಾಗೂ ಚಿರು ಮಧ್ಯೆ ಹೋಲಿಕೆ ಇದೆ. ಈತ  ಕೂಡ ಚಿರು ರೀತಿಯೇ ಜೋನ್​ಔಟ್ ಆಗ್ತಾನೆ. ಚಿರು ಕೂಡ ಹಾಗೆಯೇ ಮಾಡ್ತಾ ಇದ್ದ. ಸ್ನಾನಕ್ಕೆ ಕರೆದುಕೊಂಡು ಹೋಗ್ತೀನಿ ಎಂದರೆ ಐದು ನಿಮಿಷ ಎನ್ನುತ್ತಾನೆ. ಚಿರು ಕೂಡ ಏನೇ ಆದರೂ ಐದು ನಿಮಿಷ ಎಂದು ಹೇಳುತ್ತಾ ಇದ್ದ’ ಎಂದಿದ್ದಾರೆ ಅವರು.

No Reviews