ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ವಿಜಯಪುರದಲ್ಲಿ ಸಚಿವ ಶಿವಾನಂದ ಪಾಟೀಲ್, ಶಾಸಕರಾದ ವಿಜಯಾನಂದ ಕಾಶಪ್ಪನವರ ಮತ್ತು ಯಶವಂತರಾಯಗೌಡ ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೊಹ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಯತ್ನಾಳ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ರು, ಈ ಬಗ್ಗೆ ಕೆಂಡಾಮಂಡಲವಾದ ಯತ್ನಾಳ್, ತಮ್ಮ ಹೇಳಿಕೆ ಮೂಲಕ ತಿರುಗೇಟು ನೀಡಿದ್ದಾರೆ. “ಅವನು ಶಿವಾನಂದ ಪಾಟೀಲ್ ಅಲ್ಲ, ಶಿವಾನಂದ ಹಚಡ. ಅವನು ತನ್ನ ತಂದೆಗೆ ಹುಟ್ಟಿದವನಾದರೆ, ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡಲಿ. ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಲಿ. ಆಗ ವಿಜಯಪುರಕ್ಕೆ ಬಂದು ಸ್ಪರ್ಧಿಸಲಿ. ಮುಂದಿನ ಶುಕ್ರವಾರದೊಳಗೆ ರಾಜಿನಾಮೆ ಕೊಡಲಿ, ನಾನೇ ವಿಜಯಾನಂದನ ಮುಖ ನೋಡಿಕೊಳ್ಳುತ್ತೇನೆ. ಶಿವಾನಂದ ತನ್ನ ತಂದೆಗೆ ಹುಟ್ಟಿದವನೇ ಅಲ್ಲ ಎನಿಸುತ್ತದೆ. ಅವನು ಇಲ್ಲಿ ಬಂದು ಸ್ಪರ್ಧಿಸೋದು ಬಿಡಿ, ನಾನೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇನೆ. ಶಿವಾನಂದ ಮತ್ತು ವಿಜಯಾನಂದ ಇಬ್ಬರೂ ತಮ್ಮ ಕ್ಷೇತ್ರಗಳಿಂದ ರಾಜಿನಾಮೆ ಕೊಡಲಿ. ನಾನು ಪಕ್ಷೇತರವಾಗಿ ಅವರ ಕ್ಷೇತ್ರಗಳಲ್ಲಿ ನಿಂತು ಗೆದ್ದು ತೋರಿಸುತ್ತೇನೆ ಎಂದು ಎಂದು ಯತ್ನಾಳ್ ಸವಾಲು ಹಾಕಿದ್ದಾರೆ.
ಶಿವಾನಂದ ಪಾಟೀಲ್, ವಿಜಯಾನಂದ ಕಾಶಪ್ಪನವರ ವಿರುದ್ಧ ಯತ್ನಾಳ್ ವಾಗ್ದಾಳಿ
2025-04-30 11:45:10- 76