ಬೆಂಗಳೂರು : 2025 ಮತ್ತು 26 ನೇ ಸಾಲಿನ ಬಜೆಟ್ನನ್ನು ಮಾರ್ಚ್ 07 ರಂದು ಮಂಡಿಸುದಾಗಿ ಸಿ ಎಂ ಸಿದ್ಧರಾಮಯ್ಯ ಘೋಷಣೆ ಕರೆದಿದ್ದಾರೆ.
ವಿಧಾನಸೌಧದಲ್ಲಿ ರೈತ ಮುಖಂಡರ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು ಮಾರ್ಚ್ 03 ರಂದು ರಾಜ್ಯಪಾಲರು ಜಂಟಿ ಸದನವನ್ನ ಉದದೇಶಿ ಮಾತನಾಡುತ್ತಾರೆ ಹಾಗು ಮಂಗಳವಾರ, ಬುಧುವಾರ ಮತ್ತು ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ ತದನಂತರ ಮಾರ್ಚ್ 07 ರಂದು ಬಜೆಟ್ ಮಂಡನೆ ಮಾಡತ್ತೀವಿ ಎಂದು ಹೇಳಿದ್ದಾರೆ.
ಬಜೆಟ್ ಮಂಡಿಸಿದ ಬಳಿಕ ಚರ್ಚೆ ನಡೆಸಿ ಮಾರ್ಚ್ ಕೊನೆಯಲ್ಲಿ ಉತ್ತರ ಕೊಡುತ್ತೀನಿ ಅಧಿವೇಶನ ಎಷ್ಟು ದಿನ ನಡಿಯಬೇಕು ಅಂತ ವಿಧಾನ ಸಭೆ ಕಾರ್ಯಾಕಲಾಪ ಸಲಹ ಸಮಿತಿಯಲ್ಲಿ ಚರ್ಚೆ ನಡೆಸಿ ನಿರ್ಧಾರಿಸುತ್ತೇವೆ ಎಂದು ತಿಳಿಸಿದರು