ಮಂಗಳೂರು: ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮೇತದೇಹವನ್ನು ಅವರ ಊರು ಕಾರಿಂಜಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ. ಹೂವುಗಳಿಂದ ಅಲಂಕರಿಸಿದ ವಾಹನದಲ್ಲಿ ಮೃತದೇಹ ಊರಿನ ಕಡೆಗೆ ಹೊರಟಿದ್ದು, ಪಡೀಲ್ನಲ್ಲಿ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಸುಹಾಸ್ ಶೆಟ್ಟಿ ಮೃತ ದೇಹಕ್ಕೆ ಗೌರವ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ವಾಹನ ಸಾಗುತ್ತಿದೆ. ರಸ್ತೆ ಬದಿಯಲ್ಲಿ ಜನರು ನಿಂತು ವೀಕ್ಷಿಸುತ್ತಿದ್ದಾರೆ. ಪುದು ಗ್ರಾಮದ ಬೆಂಜನಪದವು ಪದವು ಬಳಿಯೂ ಸ್ಥಳೀಯರು ಮೃತದೇಹಕ್ಕೆ ಗೌರವ ಸಲ್ಲಿಸಿದರು.
ಹುಟ್ಟೂರು ಕಾರಿಂಜಕ್ಕೆ ಸುಹಾಸ್ ಶೆಟ್ಟಿ ಮೇತದೇಹ ಮೆರವಣಿಗೆ
2025-05-02 11:51:54- 90