News / Blog Details

  • Home
  • >
  • News / Blog Details

ಟೀಮ್ ಇಂಡಿಯಾ​ ಕೋಚ್ ಗೌತಮ್ ಗಂಭೀರ್​ಗೆ ಜೀವ ಬೆದರಿಕೆ 

  • 8
img ಟೀಮ್ ಇಂಡಿಯಾ​ ಕೋಚ್ ಗೌತಮ್ ಗಂಭೀರ್​ಗೆ ಜೀವ ಬೆದರಿಕೆ 
Font size:
Print

 ಮಂಗಳವಾರ ಮಧ್ಯಾಹ್ನ ಕಾಶ್ಮೀರದ ಪಹಲ್ಲಾಮ್ ನಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ ಬೆನ್ನಲೇ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಕಾಶ್ಮೀರದ ಐಸಿಸ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಬಂದಿದೆ. ಇಮೇಲ್ ಮೂಲಕ ಜೀವ ಬೆದರಿಕೆ ಬಂದಿದ್ದು ಈ ಕುರಿತು ಗೌತಮ್ ಗಂಭೀರ್ ಅವರು ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ISIS ಎಂಬ ಭಯೋತ್ಪಾದಕ ಸಂಘಟನೆಯಿಂದ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಬಂದಿದೆ. ಹಾಗಾಗಿ ತನಗೂ ಹಾಗೂ ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.. ಗೌತಮ್‌ ದೂರಿನ ಮೇರೆಗೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಇಮೇಲ್‌ ಮೂಲವನ್ನು ಪತ್ತೆಹಚ್ಚಲು ಮತ್ತು ಇಮೇಲ್‌ ಕಳುಹಿಸಿದ ವ್ಯಕ್ತಿಯನ್ನು ಗುರುತಿಸಲು ಸೈಬರ್‌ ಸೆಲ್‌ ಅಧಿಕಾರಿಗಳು ಸಕ್ರಿಯರಾಗಿದ್ದಾರೆ.. 
ಮಂಗಳವಾರ ಪ್ರವಾಸಿಗರ ಮೇಲೆ ಉಗ್ರರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 26 ನಾಗರಿಕರು ಮೃತಪಟ್ಟಿದ್ದು, ಈ ಘಟನೆಯನ್ನು ಗೌತಮ್‌ ಗಂಭೀರ್‌ ಕೂಡ ಖಂಡಿಸಿದ್ರು, ಇದರ ಬೆನ್ನಲ್ಲೇ ಬೆದರಿಕೆ ಮೆಲ್‌ ಬಂದಿದೆ..

No Reviews